ಪ್ರಶಸ್ತಿಗಳು :
-
ಅತ್ಯುತ್ತಮ ನಾಟಕ (ತೀರ್ಪುಗಾರರ ಆಯ್ಕೆ) - ಫಲಕ & 10,000/- ನಗದು.
-
ಅತ್ಯುತ್ತಮ ನಾಟಕ (ಪ್ರೇಕ್ಷಕರ ಆಯ್ಕೆ) - ಫಲಕ & 10,000/- ನಗದು.
-
‘ಆರ್ .ನಾಗೇಶ್’ ಗೌರವಾರ್ಥ ಅತ್ಯುತ್ತಮ ನಿರ್ದೇಶನ - ಫಲಕ & 2,500/- ನಗದು.
-
‘ಸಂಚಾರಿ ವಿಜಯ್’ ಗೌರವಾರ್ಥ ಅತ್ಯುತ್ತಮ ನಟ - ಫಲಕ & 2,500/- ನಗದು.
-
‘ಉಮಾಶ್ರೀ’ ಗೌರವಾರ್ಥ ಅತ್ಯುತ್ತಮ ನಟಿ - ಫಲಕ & 2,500/- ನಗದು.
-
‘ಟಿ. ಪಿ.ಕೈಲಾಸಂ’ ಗೌರವಾರ್ಥ ಅತ್ಯುತ್ತಮ ನಾಟಕ ರಚನೆ - ಫಲಕ & 2,500/- ನಗದು.
-
‘ಚನ್ನಕೇಶವ. ಜಿ’ ಗೌರವಾರ್ಥ ಅತ್ಯುತ್ತಮ ನಿರ್ವಹಣೆ - ಫಲಕ & 2,500/- ನಗದು.
-
ಅತ್ಯುತ್ತಮ ನಾಟಕ ವಿನ್ಯಾಸ - ಫಲಕ & 2,500/- ನಗದು.
-
ಅತ್ಯುತ್ತಮ ಭಿತ್ತಿಪತ್ರ ವಿನ್ಯಾಸ - ಫಲಕ & 2,500/- ನಗದು.
ವಿವರಗಳು :
-
ಬೆಂಗಳೂರು ಕಿರುನಾಟಕೋತ್ಸವ 2026ರ ನಿರೂಪಣಾ ವಿಷಯ – ‘ನಾಗರಿಕ ಪ್ರಜ್ಞೆ'.
-
ಭಾಗವಹಿಸುವ ತಂಡಗಳು ಮೇಲ್ಕಂಡ ವಿಷಯದ ಬಗ್ಗೆ ನಾಟಕವನ್ನು ಪ್ರದರ್ಶಿಸಬೇಕು.
-
ಭಾಗವಹಿಸುವ ಪ್ರತಿ ತಂಡಕ್ಕೂ, ರಂಗಸಜ್ಜಿಕೆಯ ಸಮಯ ಸೇರಿ 15 ನಿಮಿಷಗಳ ಕಾಲಾವಕಾಶವನ್ನು ನೀಡಲಾಗುವುದು. ನಾಟಕ ಪ್ರದರ್ಶನ ಕನಿಷ್ಠ 10 ನಿಮಿಷವಿರಬೇಕು.
-
ಭಾಗವಹಿಸುವ ಪ್ರತಿತಂಡದಲ್ಲೂ ರಂಗದಮೇಲೆ ಕನಿಷ್ಠ 2 – ಗರಿಷ್ಠ 8 ಕಲಾವಿದರಿರಬಹುದು.
-
26 ಜೂನ್ 2026ರವರೆಗೆ ನೋಂದಣಿಗೆ ಅವಕಾಶವಿರುತ್ತದೆ.
-
ರಂಗತಂಡಗಳು ಮತ್ತು ರಂಗಕರ್ಮಿಗಳು ನೋಂದಾಯಿಸಿಕೊಳ್ಳಬಹುದು.
-
ರಂಗತಂಡಗಳು ಒಂದಕ್ಕಿಂತ ಹೆಚ್ಚು ನಾಟಕಗಳನ್ನು ನೋಂದಾಯಿಸಿಕೊಳ್ಳಬಹುದು, ಆದರೆ ಕಲಾವಿದರು ಒಂದಕ್ಕಿಂತ ಹೆಚ್ಚು ತಂಡದಲ್ಲಿ ಭಾಗವಹಿಸುವಂತಿಲ್ಲ.
-
ಪ್ರತಿ ತಂಡವೂ 1000/- ರೂಪಾಯಿಗಳ ಪ್ರವೇಶ ದರವನ್ನು ಪಾವತಿಸತಕ್ಕದ್ದು, ಅಂತಿಮ ಸುತ್ತಿಗೆ ಆಯ್ಕೆಯಾಗದ ತಂಡದ ಪ್ರವೇಶ ದರವನ್ನು ಹಿಂತಿರುಗಿಸಲಾಗುವುದು.
-
ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾದ ತಂಡದ ಪ್ರವೇಶ ದರವನ್ನು ಹಿಂತಿರುಗಿಸಲಾಗುವುದಿಲ್ಲ.
-
ಮೊದಲ ಹಂತದ ಆಯ್ಕೆ ಪ್ರಕ್ರಿಯೆ 28 ಜೂನ್ 2026ರಂದು ಬೆಂಗಳೂರಿನಲ್ಲಿ ನಡೆಯಲಿದೆ.
-
ವೇಷಭೂಷಣಗಳು ಮತ್ತು ರಂಗಪರಿಕರಗಳು ಮೊದಲ ಹಂತದ ಆಯ್ಕೆ ಪ್ರಕ್ರಿಯೆಗೆ ಕಡ್ಡಾಯವಲ್ಲ.
-
ಮೊದಲ ಹಂತದ ಆಯ್ಕೆ ಪ್ರಕ್ರಿಯೆಗೆ ಸಾಮಾನ್ಯ ಬೆಳಕಿನ ವ್ಯವಸ್ಥೆ ಇರುತ್ತದೆ. ಸಂಗೀತವಿದ್ದಲ್ಲಿ, ನಿರ್ವಹಣೆಯನ್ನು ಆಯಾ ತಂಡಗಳೇ ಮಾಡಬೇಕು.
-
ಪ್ರತಿ ತಂಡವು ನಿಗದಿಪಡಿಸಿದ ಸಮಯದಲ್ಲಿ ನಾಟಕವನ್ನು ಪ್ರದರ್ಶಿಸಬೇಕು, ತಪ್ಪಿದಲ್ಲಿ ಪ್ರವೇಶ ದರವನ್ನು ಹಿಂತಿರುಗಿಸಲಾಗುವುದಿಲ್ಲ.
-
ನೊಂದಣಿಯಾದ ತಂಡಗಳು ಹಿಂದೆ ಸರಿದಲ್ಲಿ, ತಂಡದ ಪ್ರವೇಶದರವನ್ನು ಹಿಂದಿರುಗಿಸಲಾಗುವುದಿಲ್ಲ.
-
ಅಂತಿಮ ಹಂತದ ಸ್ಪರ್ಧೆಗೆ 6 ತಂಡಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.
-
ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾದ ತಂಡಗಳಲ್ಲಿ ಯಾವುದಾದರೂ ತಂಡ ಕಾರಣಾಂತರಗಳಿಂದ ಹಿಂದೆ ಸರಿದಲ್ಲಿ, ಅಂಕಗಳ ಆಧಾರದಲ್ಲಿ ಬೇರೆ ತಂಡವು ಅಂತಿಮ ಹಂತದ ಸ್ಪರ್ಧೆಗೆ ಪ್ರವೇಶ ಪಡೆಯುತ್ತದೆ.
-
ಮೊದಲ ಮತ್ತು ಅಂತಿಮ ಹಂತದ ಸ್ಪರ್ಧೆಯ ತೀರ್ಪುಗಾರರೂ ಬೇರೆಯಾಗಿರುತ್ತಾರೆ ಮತ್ತು ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ.
-
ನಾಟಕೋತ್ಸವದ ಸಂಚಾಲಕರು ಅಂತಿಮ ಸುತ್ತಿಗೆ ಆಯ್ಕೆಯಾಗುವ ತಂಡಗಳ ನಿರ್ದೇಶಕರು/ ಪ್ರತಿನಿಧಿಗಳನ್ನು ಸಂಪರ್ಕಿಸಿ ಅಂತಿಮ ಹಂತದ ಸ್ಪರ್ಧೆಯ ವಿವರಣೆಯನ್ನು ನೀಡುತ್ತಾರೆ.
-
ಬೆಳಕಿನ ವಿನ್ಯಾಸವನ್ನು ಪ್ರತಿ ತಂಡಕ್ಕೂ ಅಂತಿಮ ಹಂತದ ಸ್ಪರ್ಧೆಯ ಮೊದಲು ನೀಡಲಾಗುತ್ತದೆ.
-
ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾದ ತಂಡಗಳಿಗೆ ದಿನಾಂಕ 11 ಜುಲೈ 2026 ರಂದು, ತಾಂತ್ರಿಕ ಪೂರ್ವಾಭ್ಯಾಸಕ್ಕಾಗಿ ಬೆಳಿಗ್ಗೆ 9:30ರಿಂದ ತಾಂತ್ರಿಕ ಪ್ರದರ್ಶನ ಮಾಡಲು ಸಮಯಾವಕಾಶ ನೀಡಲಾಗುತ್ತದೆ. ನಿಗದಿಪಡಿಸಿದ ಸಮಯದಲ್ಲಿ ಪ್ರದರ್ಶನವನ್ನು ಕಡ್ಡಾಯವಾಗಿ ನೀಡಬೇಕು. ಯಾವುದೇ ಬದಲಾವಣೆಗೆ ಅವಕಾಶವಿರುವುದಿಲ್ಲ.
-
ಪ್ರತಿ ತಂಡವು ಪ್ರಸಾದನ ಮುಗಿದ ನಂತರ, ಮತ್ತೊಂದು ತಂಡಕ್ಕೆ ಗ್ರೀನ್ ರೂಮ್ ಬಿಟ್ಟು ಕೊಡಬೇಕು.
-
ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾದ ತಂಡಗಳು ತಾವು ಪ್ರದರ್ಶಿಸುವ ನಾಟಕದ ಸ್ಕ್ರಿಪ್ಟ್ ಅನ್ನು ಟೈಪ್ ಮಾಡಿ, ಮೈಕ್ರೋಸಾಫ್ಟ್ ವರ್ಡ್ ಫಾರ್ಮ್ಯಾಟ್ ನಲ್ಲಿ ನೀಡಬೇಕು.
-
ಅಂತಿಮ ಹಂತದ ಸ್ಪರ್ಧೆಯ ಪ್ರತಿ ತಂಡದ ಪ್ರದರ್ಶನ ಸಮಯವನ್ನು, ಆಯ್ಕೆಯಾದ ಎಲ್ಲಾ ತಂಡಗಳ ಪ್ರತಿನಿಧಿಗಳ ಸಮಕ್ಷಮದಲ್ಲಿ 28 ಜೂನ್ 2026 ರಂದು ಸಂಜೆ 5:00 ಗಂಟೆಗೆ ಚೀಟಿ ತೆಗೆಯುವುದರ ಮೂಲಕ ನಿರ್ಧರಿಸಲಾಗುವುದು.
-
ಅಂತಿಮ ಹಂತದ ಸ್ಪರ್ಧೆಯು 11 ಜುಲೈ 2026 ರಂದು ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
+91 - 9902590303 | +91 - 9686869676
ಹನು ರಾಮಸಂಜೀವ | ನಂದೀಶ್ ದೇವ್
ಕಲಾತ್ಮಕ ನಿರ್ದೇಶಕರು
bengalurushortplayfestival@gmail.com
